Saturday, 13 August 2016

ಕಣ್ಣು


ಕಳೆದು ಹೋಯಿತು
ಕಾಣದಾಯಿತು
ಕತ್ತಲಾಯಿತು

ಹೆಜ್ಜೆಗೆ ಹೆಜ್ಜೆ
ಇನ್ನಿಲ್ಲ ಗೆಜ್ಜೆ
ಮೌನವಾಯಿತು

ತುರುಬಿನ ಮಲ್ಲಿಗೆ
ಬಾಡಿದೆ, ಚೆಲ್ಲಿದೆ
ವಾಸನೆಯಾಯಿತು

ಹಾರಿದೆ ಚಿಟ್ಟೆ
ಮುರಿದಿದೆ ರೆಕ್ಕೆ
ಲೀನವಾಯಿತು

ಕೈತುತ್ತು ನೀಡಿದ್ದು
ಹೆಸರಿಟ್ಟು ಹಾಡಿದ್ದು
ಕನಸಾಯಿತು

ಸೋತದ್ದು, ಅತ್ತದ್ದು
ನನ್ನಾತ್ಮ ನಕ್ಕಿದ್ದು
ಸತ್ಯವಾಯಿತು

ಮೌನದ ಹಿಂದೆ.....?

ನಾಚಿಕೆ
ಕೆಂಪಾದ ಕೆನ್ನೆ, ಹೊಳಪಿಡುವ ಕಣ್ಣು
ಉಗುರು ಕೆರೆದ ನೆಲದ ಒಡಲಲಿ
ಚಿಗುರುತಿದೆ ಪ್ರೀತಿ ಮೌನದಲಿ

ಭಯ
ಜಗವು ತಮದಲಿ, ನುಡಿ ತೊದಲಲಿ
ನಡುಗುತಿರುವ ಹೃದಯದಲಿ
ಕರಗುತಿದೆ ಕನಸು ಮೌನದಲಿ

ಸಾವು
ಉಸಿರಿಲ್ಲ, ಭಾವನೆಗಳಿಲ್ಲ
ನೀರ ಮೇಲೆ ಗುಳ್ಳೆ ತೇಲಿದಂತೆ
ಸೇರುತಿದೆ ಜೀವ ಮೌನದಲಿ

ಬುದ್ಧ
ಬೋಧಿ ವೃಕ್ಷದಡಿ ಜ್ಞಾನ ಪಡೆದಿರಲು
ನಿರ್ವಾಣ ಹಾದಿಯಲಿ ಸರ್ವಸಂಗ ಪರಿತ್ಯಾಗಿಯಾಗಿ
ಸಾರುತಿಹ ಶಾಂತಿ ಮೌನದಲಿ

ಎಲ್ಲವೂ
ಬದುಕಿನ ಎಲ್ಲ ಅನುಭವಗಳ
ಸಾರಾಮೃತ ಭಿತ್ತರಿಸುವ ಹಾದಿಯಲಿ
ತತ್ವವಾಗುತಿದೆ ಮಾತು ಮೌನದಲಿ

ಬಂಧ ಮುಕ್ತೆ!

ಮತ್ತೆ ನಿನಗೆ ನಾನು ತೊಂದರೆ ಕೊಡುವುದಿಲ್ಲ
ನನ್ನ ಪ್ರೀತಿ ಪಂಜರದಲ್ಲಿ ಬಂಧಿಸುವ ಪ್ರಯತ್ನ
ನಾನೆಂದೂ ಮಾಡುವುದಿಲ್ಲ
ಹಾರಬಯಸಿದ್ದೆಯಲ್ಲ, ದಿವ್ಯ ದಿಗಂತದೆಡೆಗೆ !
ರೆಕ್ಕೆಬಿಚ್ಚಿ ಹಾರು, ಜೀವಿಸಿಕೊ ನಿನ್ನ ಜೀವನ

ನಿನಗಿನ್ನು ನನ್ನ ನೋಡಿ ಹೆದರುವ ಅಗತ್ಯವಿಲ್ಲ
ನೀನು ಬಂಧಮುಕ್ತೆ, ನನ್ನ ಎದೆಗೂಡಿನಿಂದ,
ನನ್ನ ನೆನಪುಗಳಿಂದ, ನನ್ನ ಕನಸುಗಳಿಂದ
ಆ ದಿನಮಣಿಯ ಕಿರಣ ನೀ ಹಾರುವ ದಿಕ್ಕನು
ಬೆಳಗುತಿಹುದು, ಹೊರಡು ಬೇಗ

ನಿನ್ನ ಜೀವನ ನಂದಾದೀಪವಾಗಲೆಂದೇ
ಹಣತೆಯಲಿ ನನ್ನುಸಿರ ಸುರಿಯುತಿಹೆ
ಬಸಿದುಕೊ ಸಾದ್ಯವಾದಷ್ಟು,
ಆದಷ್ಟು ಬೇಗ ಬರಿದಾಗಿಸು
ಆಗಲೇ ನಾನು ನಿನ್ನ ನೆನಪುಗಳಿಂದ ಮುಕ್ತ

ಇದುವರೆಗಿನೆಲ್ಲ ಕನಸುಗಳ ಹೂಮಾಲೆಯಾಗಿಸಿ
ನಿನ್ನ ಪಾದದಡಿ ಇಡುವೆ,
ಹಾರುವ ಕಾಲುಗಳಿಗದೇ ಚೈತನ್ಯವಂತೆ
ಒಮ್ಮೆ ತುಳಿದು ಹಾಗೆಯೇ ನೆಗೆದು ಬಿಡು
ನಭ ನೀಲಿಯೆಡೆಗೆ

ಮತ್ತೆ ನನ್ನ ಕಣ್ಣ ನೋಡಬೇಡ, ಕಳೆದುಕೊಂಡಿದ್ದೇನೆ
ಅವುಗಳಲ್ಲಿ ಅಶ್ರುಧಾರೆ ಹರಿದೀತೆಂದು
ಮತ್ತೆ ಮಿಡುಕಬೇಡ, ಕೈ ಚಾಚಬೇಡ
ಮಣ್ಣಲ್ಲಿ ಮಣ್ಣಾಗಿ ಹೋಗುವ ಮುನ್ನ
ಹಾರಿ ಬಿಡು, ಪ್ರಾಣ ಪಕ್ಷಿ ಹಾರಿದಂತೆ !!

ನಾನು ಯಾರು?

ನಾನು ಎಂದಷ್ಟು
ನನಗೆ ನಿಗೂಢವೇ ಹೆಚ್ಚು
ಪ್ರಶ್ನಿಸಿಕೊಳ್ಳಬೇಕು ನಾನು
ಇದು ನಿಜವೇ ಎಂದು

ನಾನು ಇನ್ನೊಬ್ಬರಿಗಿಂತ
ಹೇಗೆ ಭಿನ್ನ?
ಎಲ್ಲರ, ಎಲ್ಲ ಅಂಶಗಳು
ನನ್ನೊಳಗೂ ಇವೆ...!!

ಒಳ್ಳೆಯವನೆಂದರೆ ಒಳ್ಳೆಯವನು
ಕೆಟ್ಟವನೆಂದರೆ ಕೆಟ್ಟವನು, ನಿಜ
ನನ್ನೆದುರಿಗಿರುವವನ
ಪ್ರತಿಬಿಂಬ ನಾನು...!!

ಆಸೆಯಿಲ್ಲ, ದೂಷಣೆಯಿಲ್ಲ
ಕೈಗೆ ಸಿಕ್ಕಷ್ಟು ಪ್ರೀತಿಯಲಿ ತೃಪ್ತಿ
ತೇಲುವ ಅಲೆಗಳ ಮೇಲೆ
ಹುಟ್ಟು ಹಿಡಿದ ಮೀನುಗಾರ

ಏನೇ ಹೇಳಿದರೂ, ದೂಷಿಸಿದರೂ
ಒಪ್ಪಿಕೊಳುವೆ ನಾನು, ನಿಜವಿರಬಹುದು
ಆದರೆ, ಅಂತರಂಗದೊಳಿಹೆನು
ನನ್ನಂತೆ ನಾನು...!!

ಎದೆಯೊಳಗಿನ ಪುಷ್ಯಮಳೆ

ಕತ್ತಲೆಯಲ್ಲಿ ಆರು ಕಣ್ಣುಗಳು
ಮಿಂಚು ಹೊಳೆದಂತೆಲ್ಲ ಫಳ ಫಳ
ಸೂರಿನ ಮೇಲೆ ಮುಗಿಬಿದ್ದಿದೆ
ದೊಡ್ಡ ಪುಷ್ಯಮಳೆ

ಮೂಟೆಯಡಿ ಬಿದ್ದ ಸಂಕುವಿಗೆ
ಮೊಣಕಾಲೆಲ್ಲ ಗಾಯ
ತೂತು ಬಿದ್ದ ಕೊಡೆಯಲ್ಲಿ ನೀರು
ಹರಿದಿದ್ದು ರಕ್ತಕಣ್ಣೀರು

ಕೈಯ್ಯಲ್ಲಿ ಚಾಕು, ಗೋಟು ಅಡಿಕೆ
ಪಾತಿಯ ಓಟ ಸೂರಿನೆಡೆಗೆ
ಮಳೆಗೆ ತೊಯ್ದ ಸೀರೆ ಕಪ್ಪು
ಒದ್ದೆಯಾದ ಒಡಲು ಉರಿದಿತ್ತು

ಇಬ್ಬರದೂ ಹಿಡಿ ಹಿಡಿ ಶಾಪ
ಪುಷ್ಯ ಮಳೆಗೆ ಆರದಿರಲಿ ದೀಪ
ನಿಂತಿಲ್ಲ ಓಟ, ನಿಂತಿಲ್ಲ ಮಳೆ
ಕಣ್ಣುಗಳಲ್ಲಿ ಅದೇ ಭಯ, ಹೊಳಪು

ಪಾತಿ-ಸಂಕು, ಗೋಣಿತಾಟು ಸರಿಸಿ
ಚಿಮುಣಿ ಬುಡ್ಡಿಗೆ ಕಡ್ಡಿ ಕೀರಿದಾಗ
ಕಣ್ಣುಗಳಲ್ಲಿ ಈಗ ಬೆಳಕಿತ್ತು
ಎದೆಯೊಳಗಿನ ಪುಷ್ಯಮಳೆ ನಿಂತಿತು

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ?

ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುವುದು ಹೇಗೆ? ಇದು ಪ್ರತಿ ವರ್ಷ ನನ್ನನ್ನ ಕಾಡೋ ಪ್ರಶ್ನೆ. ಹೊಸ ವರ್ಷ ಆರಂಭ ಆದಾಗ ‘ನನ್ನ ಎಲ್ಲಾ ನಡವಳಿಕೆಯನ್ನ ಬದಲಾಯಿಸಿಕೊಳ್ಬೇಕು, ನಾನೂ ಬೆಳೆಯಬೇಕು, ಓದಬೇಕು, ನಾಲ್ಕು ಜನಕ್ಕೆ ಸಹಾಯ ಮಾಡಬೇಕು’ ಎಂದು ಮನಸ್ಸಿನಲ್ಲಿ ಸಾಕಷ್ಟು ಬಾರಿ ಅಂದುಕೊಳ್ತೇನೆ. ಆದರೆ ನಿತ್ಯದಂತೆಯೇ ಕಳೆದು ಹೋಗುತ್ತವೆ ನಾಳೆಗಳು, ಹೊಸ ವರ್ಷಗಳು, ಯಾವುದೇ ಬದಲಾವಣೆಗಳಿಲ್ಲದೆ. ಬದಲಾವಣೆಗಾಗಿ ಯೋಚನೆ ಮಾಡ್ತೇವೆ, ಬದಲಾವಣೆ ಆಗದಿದ್ದರೆ ನಾಳೆ ಅದರಿಂದಾಗುವ ಪರಿಣಾಮಗಳ ಬಗ್ಗೆಯೂ ಯೋಚಿಸ್ತೇವೆ. ಆದರೆ ಬದಲಾವಣೆ ಮಾತ್ರ ಆಗೋದಿಲ್ಲ. ತಮ್ಮ ಬದುಕಿನಲ್ಲಿ ಅದ್ಭುತ ಶಿಸ್ತನ್ನ ರೂಢಿಸಿಕೊಂಡಿರುವ ಹಲವಾರು ವ್ಯಕ್ತಿಗಳನ್ನ ನೋಡ್ತೇನೆ. ಊಟದಿಂದ ಹಿಡಿದು ತಮ್ಮ ಸಂಪೂರ್ಣ ವ್ಯಕ್ತಿತ್ವÀ ನಿರೂಪಿಸಿಕೊಂಡಿರುವಲ್ಲಿನ ಅಗಾಧ ಶಿಸ್ತು ಅವರದ್ದು. ಇವರಿಂದ ಸಾಕಷ್ಟು ಪ್ರಭಾವಕ್ಕೆ ಒಳಗಾಗ್ತೇನೆ. ಹಾಗಿದ್ದರೂ ಯಾಕೆ ನಾನು ಬದಲಾಗೋದಿಲ್ಲ?

ನಾನು ನನ್ನ ಮನಸ್ಸನ್ನು ಹುಂಬತನದಿಂದ ಹಿಡಿದಿಟ್ಟಿರುವ ನಂಬಿಕೆ ಏನೆಂದರೆ ‘ನಾನು ಮಾಡುತ್ತಿರುವುದು ಸರಿ ಎಂದೆನಿಸಿದರೆ ಮತ್ತೆ ಜಗತ್ತಿಗೆ ಅಥವಾ ಸಮಾಜಕ್ಕೆ ಹೆದರಬೇಕಾದ ಅಗತ್ಯವಿಲ್ಲ” ಎಂಬುದು. ಹಾಗಾಗಿ ಬಹಳ ಸಲ ನಾನು ಮಾಡುತ್ತಿರುವುದು ಸರಿ ಎಂದೆನಿಸಿದಾಗ ಜನ ಏನೇ ಹೇಳಿದರೂ ನಾನು ಅದರ ಬಗ್ಗೆ ಕಿವಿಗೊಟ್ಟಿಲ್ಲ, ಬದಲಾವಣೆಗೊಳ್ಳುವ ಯೋಚನೆಯನ್ನೂ ಮಾಡಿಲ್ಲ. ಆದರೆ ನಾನು ‘ಸರಿ’ ಎಂದು ವಾಧಿಸುವ ನನ್ನ ನಂಬಿಕೆಗೆ ಆಧಾರ ಯಾವುದು? ಕೆಲವು ಸಲ ಮನೆಯಲ್ಲಿ ಅಮ್ಮನಿಗೆ, ಅಕ್ಕನಿಗೆ, ತಮ್ಮನಿಗೆ ಬುದ್ಧಿ ಹೇಳೋಕೆ ಹೋಗ್ತೇನೆ, ಅವರು ನಾನು ಹೇಳಿದ್ದನ್ನ ಕೇಳಬೇಕು ಅಂತ ಬಯಸುತ್ತೇನೆ ಅದೇ ನನ್ನ ಶಿಸ್ತು, ನೀವೂ ಪಾಲಿಸಬೇಕು ಎಂದು ಕೂಗಾಡ್ತೇನೆ. ಆದರೆ ಅವರ ಜಾಗದಲ್ಲಿ ನಿಂತು ಯೋಚಿಸುವುದರಲ್ಲಿ ಸೋಲ್ತೇನೆ. ಕೇವಲ ನನ್ನ ಅನುಭವದ ಹಿನ್ನೆಲೆಯಲ್ಲಿ ಕಟ್ಟಿಕೊಂಡ ನಂಬಿಕೆಗಳಿಂದ ಮಾತ್ರ ಶಿಸ್ತು ಬಂದುಬಿಡುವುದಿಲ್ಲ ಅಥವಾ ಬದಲಾವಣೆಯಾಗುವುದಿಲ್ಲ. ನನ್ನ ಅನುಭವದ ಜೊತೆಗೆ ನನ್ನ ಕುಟುಂಬದ, ನನ್ನ ಸಮಾಜದ ಅನುಭವದಿಂದ ಪಡೆದ ನಂಬಿಕೆಯ ಗಟ್ಟಿಯಾದ ನಿಲುವಿನಿಂದ ಮಾತ್ರ ಶಿಸ್ತನ್ನು ಪಡೆಯಲು ಸಾದ್ಯ ಎಂದೆನಿಸುತ್ತಿದೆ.

ದೇವರು, ಮೂಢನಂಬಿಕೆ, ಜಾತಕ ಇವುಗಳ ಬಗ್ಗೆ ನನ್ನ ನಿಲುವು, ದೃಷ್ಟಿಕೋನ ಬದಲಾಗಿದೆ ಎಂದು ನಂಬಿದ್ದೆ. ಮನೆಯಲ್ಲಿ ನಡೆಯುವ ಪೂಜೆ ಪುನಸ್ಕಾರಗಳನ್ನ ತಿರಸ್ಕರಿಸಿದ್ದೆ. ಇಂತಹ ನಂಬಿಕೆಗಳಿಗಾಗಿ ಹಣ ಫೋಲಾಗುವುದನ್ನು ಖಂಡಿಸಿದ್ದೆ. ಆದರೆ ಕೆಲವು ಸಂದರ್ಬಗಳಲ್ಲಿ ಅನಿವಾರ್ಯವಾಗಿ ಅವರ ನಂಬಿಕೆಯ ಎದುರು ತಲೆಬಗ್ಗಿಸಿ ನಿಂತದ್ದಿದೆ. ಮೂರು ಜನ ಪುರೋಹಿತರು ನನ್ನ ಅಭಿವೃದ್ಧಿಗಾಗಿ ಹೋಮ ಮಾಡುವಾಗ ಅವರೆದುರು ಅಸಹನೀಯವಾದ ನೋವು ಉಂಡದ್ದಿದೆ. ಆಗೆಲ್ಲಾ, ಮನೆಯವರ ನಂಬಿಕೆಯೆದುರು ನನ್ನ ನಿಲುವು ಸೋತದ್ದು ಯಾಕೆ? ಅವರ ಮನಪರಿವರ್ತಿಸುವಲ್ಲಿ ಎಡವಿದ್ದೆಲ್ಲಿ? ಇವೆಲ್ಲವನ್ನೂ ಮೀರಿ ನನ್ನ ನಂಬಿಕೆಯನ್ನು, ಶಿಸ್ತನ್ನು ಉಳಿಸಿಕೊಳ್ಳಬೇಕಾದರೆ ನಾನು ಏನು ಮಾಡಬೇಕು? ನನ್ನ ನಿಲುವು ಎಷ್ಟು ದೃಡವಾದದ್ದು? ಎಂದು ಪ್ರಶ್ನಿಸಿಕೊಂಡು ಪರಿತಪಿಸಿದ್ದೇನೆ.

ಶಿಸ್ತು ಮೂಡಿಸಿಕೊಳ್ಳಬೇಕಾದರೆ ಎಲ್ಲಾ ಸಂಬಂಧಗಳ ಮೋಹದಿಂದ ಹೊರಬರಬೇಕೆ? ಬದುಕನ್ನ ರೂಪಿಸಿಕೊಳ್ಳಬೇಕಾದರೆ ಯಾವುದೋ ಒಂದು ದಾರಿಯನ್ನ ಅಯ್ಕೆ ಮಾಡಿಕೊಳ್ಳಬೇಕು. ಆದರೆ ನನಗೆ ಎರಡೂ ದಾರಿ ಅμÉ್ಟೀ ಸತ್ಯ (ಒಳ್ಳೆಯದು) ಅμÉ್ಟೀ ಸುಳ್ಳು (ಕೆಟ್ಟದ್ದು). ನನ್ನ ಮನಸ್ಸು ಅಷ್ಟು ಪಕ್ವವಾಗಿಲ್ಲ, ಅಷ್ಟು ದೃಢವಾಗಿಲ್ಲ. ಆಯ್ಕೆ ಮಾಡಿಕೊಂಡ ದಾರಿಯಲ್ಲಿ ಬರುವ ಸಮಸ್ಯೆಗಳನ್ನು ಎದುರಿಸುವ ನನ್ನ ಶಕ್ತಿ ಮತ್ತು ದೃಢನಂಬಿಕೆಯಿಂದ ಮಾತ್ರ ಶಿಸ್ತಿನ ಬದುಕನ್ನ ಕಟ್ಟಿಕೊಳ್ಳಲು ಸಾಧ್ಯವಾಗಬಹುದು ಎಂದೆನಿಸುತ್ತಿದೆ.

ಪೇರಿ ಒಮ್ಮೆ ಹೇಳಿದ ಮಾತು ನೆನಪಾಗುತ್ತಿದೆ ‘ನನಗೆ ಇರುವ ಸಮಯ ಕಡಿಮೆ ಇದೆ, ಅದರೆ ಮೀರಲಿಕ್ಕಿರುವುದು ಬಹಳಷ್ಟಿದೆ, ಇನ್ನೂ ಗಟ್ಟಿಯಾಗಬೇಕಿದೆ’ ಎಂದು. ಬಹುಷಹ ಜೀವನದ ಇಂತಹ ಹಲವು ಸತ್ಯಗಳನ್ನು ಅರ್ಥಮಾಡಿಕೊಳ್ಳುವುದು ನಮ್ಮನ್ನು ಗಟ್ಟಿಯಾಗಿಸುವಲ್ಲಿ ಮತ್ತು ಬಂಧನದಿಂದ ಹೊರಬರಲು ಸಹಾಯಮಾಡಿಕೊಡುತ್ತವೆ. ಬರಿ ಯೋಚನೆಯಿಂದ ಮತ್ತು ಚಿಂತನೆಯಿಂದ ಮಾತ್ರ ಬದಲಾವಣೆ ಸಾಧ್ಯವಿಲ್ಲ. ಆ ಚಿಂತನೆಯಂತೆ ಬಾಳುವುದೂ ಅμÉ್ಟೀ ಮುಖ್ಯ. ಚಿಕ್ಕ ಚಿಕ್ಕ ಪ್ರಯತ್ನಗಳು ನಮ್ಮಲ್ಲಿ ಶಿಸ್ತನ್ನು ರೂಪಿಸಿಕೊಳ್ಳಲು ಬುನಾದಿಯಾಗಬಹುದು. ನನ್ನ ಸ್ನೇಹಿತ ಇತ್ತೀಚೆಗೆ ಪ್ರಾರಂಭಿಸಿದ ಇಂತಹ ಪ್ರಯತ್ನ ನನಗೆ ತುಂಬಾ ಅಸಕ್ತಿದಾಯಕವಾಗಿ ಕಂಡಿತು. ಆತ ಹಂತಹಂತವಾಗಿ (ಪ್ರಜ್ಞಾಪೂರ್ವಕವಾಗಿ) ಚಹ ಕುಡಿಯುವದನ್ನು ಬಿಟ್ಟಿದ್ದು, ರಾತ್ರಿ ಊಟವನ್ನು ಕಡಿಮೆ ಮಾಡಿದ್ದು ಹೀಗೆ ಜೀವನಕ್ಕೆ ಅವಶ್ಯವಲ್ಲ ಎನ್ನುವ ಚಿಕ್ಕ ಚಿಕ್ಕ ಅಂಶಗಳನ್ನು ಬಿಟ್ಟಿದ್ದು ಆತನ ಮನಸ್ಸನ್ನು ದೃಢಗೊಳಿಸಿದೆ, ಮುಂದಿನ ಗಟ್ಟಿ ನಿರ್ಧಾರಗಳನ್ನು ತೆಗೆದುಕೊಳ್ಳಲು ಮನಸ್ಸನ್ನ ಸಿದ್ಧಗೊಳಿಸಿದೆ.  ಈ ಎಲ್ಲಾ ಅನುಭವಗಳು ನನಗೆ ಬದುಕಿನಲ್ಲಿ ಶಿಸ್ತನ್ನು ಮೂಡಿಸಿಕೊಳ್ಳುದರ ಅವಶ್ಯಕತೆ ಮತ್ತು ಪ್ರಾಮುಖ್ಯತೆಯನ್ನ ತಿಳಿಸಿದೆ. ಜೀವನದ ಸತ್ಯವನ್ನ ಅರ್ಥೈಸಿಕೊಳ್ಳುವುದು ಮತ್ತು ಅದಕ್ಕೆ ಅನುಗುಣವಾಗಿ ಬಾಳುವ ಪ್ರಯತ್ನ ನಡೆಸುವುದು ನಮ್ನನ್ನು ವಿಹ್ವಲತೆಯ ಬದುಕಿನಿಂದ ಮುಕ್ತಗೊಳಿಸಲು ಸಾದ್ಯವೆಂದು ಅರಿವಾಗುತ್ತಿದೆ. 

ವಿಶ್ಲೇಷಣೆ

ವಿಶ್ಲೇಷಣೆ ಮತ್ತು ತಾರ್ಕಿಕ ಚಿಂತನೆ:

ವಿಶ್ಲೇಷಣೆ ನಮ್ಮ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಸತ್ಯಕ್ಕೆ ಹತ್ತಿರವಾದ ಹಾಗೂ ವೈಜ್ಞಾನಿಕವಾದ ಉತ್ತರವನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಸಂಶೋಧನೆಯಲ್ಲಿ ಇದು ಒಂದು ಮುಖ್ಯವಾದ ಹಂತ. ಮಾಹಿತಿಯನ್ನು ಗುಣಾತ್ಮಕವಾಗಿ ಅಥವಾ ಪರಿಮಾಣಾತ್ಮಕವಾಗಿ, ವಿವಿಧ ವಿಶ್ಲೇಷಣಾ ವಿಧಾನಗಳ ಮೂಲಕ ಓರೆಗೆ ಹಚ್ಚಿ ಉತ್ತರಗಳನ್ನ ಕಂಡುಕೊಳ್ಳಲು ಸಹಾಯ ಮಾಡುತ್ತದೆ. ಆದರೆ ತಾರ್ಕಿಕ ಚಿಂತನೆ ಯಾವುದೇ ವೈಜ್ಞಾನಿಕ ವಿಧಾನಗಳಿಲ್ಲದೆ ಕೇವಲ ಹಿಂದಿನ ಅನುಭವಗಳ ಆಧಾರದ ಮೇಲಿನ ಊಹೆ ಮತ್ತು ಲಭ್ಯವಿರುವ ಕೆಲವೇ ಕೆಲವು ಮಾಹಿತಿಯ ಆಧಾರದ ಮೇಲೆ ನಿಲ್ಲುವ ಅಭಿಪ್ರಾಯ. ಈ ಅಭಿಪ್ರಾಯ ಅಥವಾ ಚಿಂತನೆ ಎಷ್ಟು ಸರಿ ಎಂಬುದನ್ನು ಮತ್ತೆ ಸರಿಯಾದ ವಿಶ್ಲೇಷಣೆಯ ಮೂಲಕ ತಿಳಿಯಬಹುದು. ಇಲ್ಲಿ ನನ್ನ ಅಭಿಪ್ರಾಯದಲ್ಲಿ ಸಂಶೋಧಕರಿಗೂ, ಜನಸಾಮಾನ್ಯರಿಗೂ ಅಥವಾ ಕ್ಷೇತ್ರದಲ್ಲಿ ಕೆಲಸಮಾಡುವ ಪ್ರತಿಯೊಬ್ಬರಿಗೂ ವಿಶ್ಲೇಷಣೆಗಿಂತ ಮುಖ್ಯವಾಗಿ ಈ ತಾರ್ಕಿಕ ಚಿಂತನೆಯ ಮನೋಭಾವ ಬೇಕು ಎಂಬುದು.

ಎರಡು ವರ್ಷಗಳ ಹಿಂದೆ ನಾನು ಪೆರಿಯವರ ಮನೆಯಲ್ಲಿ ವಾಸವಾಗಿದ್ದೆ. ಮನೆಗೆ ಯಾವುದೇ ಸಾಮಗ್ರಿಗಳು ಬೇಕಿದ್ದರೂ ದೂರದಲ್ಲಿದ್ದ ಮೈನ್ ರೋಡ್‍ನಲ್ಲಿರುವ ಅಂಗಡಿಗಳಿಂದ ಅಥವಾ ಸೂಪರ್ ಮಾರ್ಕೇಟ್‍ನಿಂದ ತರ್ತಿದ್ದೆ. ನಮ್ಮ ಮನೆ ಇದ್ದ ಪ್ರದೇಶದಲ್ಲಿ ಸುಮಾರು 50-60 ಮನೆಗಳು ಇದ್ದಿರÀಬಹುದು. ಒಮ್ಮೆ ಪೆರಿ ಕೇಳಿದ್ರು ‘ಈ ಪ್ರದೇಶದಲ್ಲಿ ಎಲ್ಲೂ ಚಿಕ್ಕ ಅಂಗಡಿಗಳು ಇಲ್ವಾ’ ಅಂತ. ಎಲ್ಲೂ ಅಂಗಡಿಗಳನ್ನ ಗಮನಿಸದೇ ಇದ್ದರಿಂದ ನಾನು ಸಹಜವಾಗಿ ‘ಇಲ್ಲ’ ಎಂದೆ. ಆಗ ಅವರು ‘ಅದು ಹೇಗೆ ಸಾದ್ಯ, ಇಷ್ಟು ಮನೆಗಳಿರುವ ಜಾಗದಲ್ಲಿ ಎಲ್ಲಾದರೂ ಒಂದು ಕಡೆ ಚಿಕ್ಕ ಪೆಟ್ಟಿ ಶಾಪ್ ಆದರೂ ಇರಲೇ ಬೇಕಲ್ಲ, ಎಲ್ಲಾ ಸಂದರ್ಭದಲ್ಲೂ ಸೂಪರ್ ಮಾರ್ಕೇಟ್‍ಗೆ ಹೋಗೋದಿಕ್ಕೆ ಆಗಲ್ಲ. ಅಕಸ್ಮಾತ್ ಎನಾದರೂ ಚಿಕ್ಕ ಪುಟ್ಟ ಅಗತ್ಯತೆಗಳು ಬಂದಾಗ ಅದು ಸಿಗುವ ವ್ಯವಸ್ತೆಯನ್ನು ಬಹುಶಹ ಜನ ಮಾಡಿಕೊಂಡಿರ್ತಾರೆ’ ಅಂತ ಹೇಳಿದ್ರು. ಅವರ ಆ ತಾರ್ಕಿಕ ಚಿಂತನೆ ನನಗೆ ನಿಜ ಅನ್ನಿಸಿತು. ಸೂಪರ್ ಮಾರ್ಕೇಟ್‍ಗಳೆಲ್ಲ ಇತ್ತೀಚಿನ ಬದಲಾವಣೆಗಳು ಆದರೆ ಬಹಳ ವರ್ಷದಿಂದ ಆ ಪ್ರದೇಶದಲ್ಲಿ ಜನ ಬದುಕ್ತಾ ಇದ್ದಾರೆ ಅಂದ್ರೆ ಇಂತಹ ಏರ್ಪಾಡುಗಳನ್ನ ಮಾಡಿಕೊಂಡಿರುವುದು ಸಹಜ. ಅವರ ಈ ತರ್ಕವನ್ನ ಮನಸ್ಸಿನಲ್ಲಿ ಇಟ್ಟುಕೊಂಡು ಆ ಪ್ರದೇಶವನ್ನ ರೌಂಡ್ ಹಾಕಿದ್ರೆ ಅಲ್ಲಲ್ಲಿ, ಮನೆಯಲ್ಲಿ ಚಿಕ್ಕಪುಟ್ಟ ಅಂಗಡಿಗಳ ವ್ಯವಸ್ತೆ ಮಾಡಿಕೊಂಡಿದ್ದು ಕಾಣಿಸ್ತು. ಬಹುಶಹ ಇಂತಹ ಹಲವಾರು ಉದಾಹರಣೆಗಳು ನಿಮ್ಮಲ್ಲಿ ಇರಬಹುದು. ತಾರ್ಕಿಕ ಚಿಂತನೆ ನಮ್ಮ ಮನಸ್ಸಿನಲ್ಲಿ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕುತ್ತದೆ, ವಿಶ್ಲೇಷಣೆ ಈ ಪ್ರಶ್ನೆಗಳಿಗೆ ವೈಜ್ಞಾನಿಕವಾದ ಉತ್ತರಗಳನ್ನ ಹುಡುಕೋದಿಕ್ಕೆ ಸಹಾಯ ಮಾಡ್ತದೆ.

ಸ್ವ-ವಿಶ್ಲೇಷಣೆ:
ಸಹಜವಾಗಿ ನಾವು ಬೇರೆಯವರನ್ನ, ಸಮಾಜವನ್ನ, ನಿತ್ಯ ಜೀವನದಲ್ಲಿ ನಡೆಯುವ ಹಲವು ವಿಷಯಗಳನ್ನು ವಿಶ್ಲೇಷಿಸುವುದಕ್ಕೆ ಪ್ರಯತ್ನಿಸುತ್ತೇವೆ. ಆದರೆ ನಮ್ಮನ್ನು ನಾವು ಆ ಕನ್ನಡಿಯ ಮುಂದೆ ನಿಲ್ಲಿಸಿಕೊಳ್ಳುವುದಕ್ಕೆ ಒಪ್ಪುವುದಿಲ್ಲ. ಆ ಮನುಷ್ಯ ಸರಿ ಇಲ್ಲ ಎಂದು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವೆ, ಆದರೆ ನಿಜವಾಗಿ ವಿಶ್ಲೇಷಣೆ ಮಾಡಿದರೆ ಆ ವ್ಯಕ್ತಿಗಿಂತ ನಾವೇ ಎμÉ್ಟೂೀ ಕೆಟ್ಟವರಾಗಿರ್ತೆವೆ. ಬೇರೆಯವರ ತಪ್ಪುಗಳಿಗೆ ಕಾರಣ ಹುಡುಕುವ ನಾವು ನಮ್ಮ ತಪ್ಪುಗಳಿಗೆ ಸಾಕಷ್ಟು ಸಮರ್ಥನೆ ಕೊಟ್ಟುಕೊಳ್ತೇವೆ.

ಬೆಂಗಳೂರು ರೈಲ್ವೇ ಸ್ಟೇಷನ್‍ನಲ್ಲಿ, ಎಪ್ಪತ್ತರ ವಯಸ್ಸಿನ ಒಬ್ಬ ಹೆಂಗಸು, ಡಸ್ಟ್‍ಬಿನ್ ಒಳಗಿಂದ, ಜನ ತಿಂದು ಬಿಸಾಕಿದ ಆಹಾರದ ಪೊಟ್ಟಣದೊಳಗಿಂದ ಆಹಾರಗಳನ್ನ ಸಂಗ್ರಹಿಸುತ್ತಾ ಇದ್ದಳು. ನನಗೆ ಬಹಳ ಬೇಸರ ಆಗಿ ಆ ತಾಯಿಗೆ ಹೇಳಿದೆ ‘ಅದನ್ನ ತಿನ್ನಬೇಡ, ಅದು ಸರಿ ಇಲ್ಲ’ ಎಂದು. ಅಲ್ಲದೆ ನನ್ನ ಕೈಲಿದ್ದ ಇನ್ನೂರು ರೂಪಾಯಿಗಳನ್ನು ಅವಳಿಗೆ ಕೊಟ್ಟೆ. ನಾಜೂಕಿನಿಂದ ಆಹಾರಗಳನ್ನು ಡಬ್ಬಿಗೆ ಸೇರಿಸಿದ ಹೆಂಗಸು, ದುಡ್ಡನ್ನು ವಾಪಸ್ ನನ್ನ ಕಿಸೆಯಲ್ಲಿ ಇಡುತ್ತ ಸುಮ್ಮನೆ ನಕ್ಕು ತನ್ನ ಪಾಡಿಗೆ ಹೊರಟು ಹೋದಳು. ಒಮ್ಮೆ ಮನಸ್ಸಿಗೆ ಅನ್ನಿಸಿತು ಈ ಹೆಂಗಸಿಗೆ ಎಷ್ಟು ಅಹಂಕಾರ ಎಂದು. ಆದರೆ ಆಕೆಯ ಜಾಗದಲ್ಲಿ ನಿಂತು ಯೋಚಿಸಿದರೆ ಆಕೆ ಮಾಡಿದ್ದು ಸರಿ. ಆವತ್ತಿನ ಮಟ್ಟಿಗೆ ನಾನು ಆಕೆಯ ಹಸಿವನ್ನ ತೀರಿಸಬಹುದಿತ್ತು ಆದರೆ ದಿನನಿತ್ಯ ಆಕೆಯ ಹಸಿವನ್ನ ತೀರಿಸುವವರು ಯಾರು? ಬಹುಶಹ ಆ ಡಸ್ಟ್‍ಬಿನ್‍ಗೆ ಮಾತ್ರ ಸಾದ್ಯ. 

ಆ ದಿನ ಆ ಹೆಂಗಸಿನ ಬಗ್ಗೆ ನನ್ನ ಮನಸ್ಸಿನಲ್ಲಿ ಮೂಡಿದ ಮಮಕಾರ ನಿಜವೇ ಇರಬಹುದು, ಆದರೆ ಪ್ರತಿ ನಿತ್ಯ ನನ್ನ ಸುತ್ತ ಮುತ್ತ ನಡೆಯುವ ಇಂತಹ ಹಲವಾರು ಘಟನೆಗಳನ್ನು ನಾನು ನೋಡಿಯೂ ನೋಡದೇ ಇರುವ ಹಾಗೆ ಬದುಕುತ್ತೇನೆ. ಕೆಲವು ಸಂದರ್ಬದಲ್ಲಿ ಕೇವಲ ತೋರಿಕೆಗಾಗಿ, ನೋಡುವ ಜನರಿಗಾಗಿ ಸಮಾಜ ಸೇವೆ ಮಾಡೂ ನಾಟಕ ಮಾಡ್ತೇವೆ. ನಡೆ ಮತ್ತು ನುಡಿಯಲ್ಲಿ ಸಾಕಷ್ಟು ವ್ಯತ್ಯಾಸ ಮಾಡ್ತೇವೆ. ಯಾರದ್ದೋ ಸ್ನೇಹಕ್ಕೆ ದ್ರೋಹ ಮಾಡಿರ್ತೇವೆ, ಯಾವುದೋ ಪ್ರೀತಿಗೆ ಮೋಸ ಮಾಡಿರ್ತೇವೆ, ಯಾರದೋ ಗೌರವ ದಕ್ಕೆ ಆಗುವ ಹಾಗೆ ಗಾಸಿಪ್ ಮಾಡಿರ್ತೇವೆ. ಇದೆಲ್ಲವೂ ಸಮಾಜದಲ್ಲಿ ನಡಿತಾ ಇದೆ ಅಂದುಕೊಂಡಿರ್ತೇವೆ, ಆದರೆ ಇಂತಹ ಎμÉ್ಟೂೀ ಅಂಶಗಳು ನಮ್ಮೊಳಗೆ ಹುಟ್ಟಿ ಬೆಳೆದು ಅಂತಹ ಸಮಾಜ ಆಗೋದಿಕ್ಕೆ ಕಾರಣವಾಗಿರ್ತವೆ. ಯಾವತ್ತೋ ಒಂದು ದಿನ ರೈಲ್ವೇ ಸ್ಟೇಷನ್‍ನಲ್ಲಿ ಕಂಡ ಆ ಹೆಂಗಸಿನ ಹಸಿವನ್ನ ನೀಗಿಸೊದಿಕ್ಕೆ ಹೊರಟ ನನಗೆ ನೆನಪಾದದ್ದು ಕಳೆದ ಮೂರು ತಿಂಗಳಿನಿಂದ ಯಾವುದೋ ಕಾರಣಕ್ಕೆ ನಾನು ಮನೆಗೆ ಹಣ ಕಳಿಸುವುದನ್ನ ನಿಲ್ಲಿಸಿದ್ದು.

ಚಾಂದ್ ಬೀ ದಾದಿ

ಈಗ ‘ದಾದಿ’ ಎಂದು ಪ್ರೀತಿಯಿಂದ ಕರೆಯಿಸಿಕೊಳ್ಳುವ ಎಂಬತ್ತು ವರ್ಷದ ಚಾಂದ್‍ಬೀ ಹುಟ್ಟಿದ್ದು ಸುರಪುರ ತಾಲೂಕಿನ ರಂಗಂಪೇಟೆಯಲ್ಲಿ. ಬಡಕುಟುಂಬದಿಂದ ಬಂದ ಇವರ ತಂದೆ ಕಿರಾಣಿ ಅಂಗಡಿಯೊಂದರಲ್ಲಿ ಕೂಲಿಯಾಗಿ ದುಡಿಯುತ್ತಿದ್ದರು. ಇವರಿಗೆ ಐದು ಜನ ಮಕ್ಕಳು (ಮೂರು ಹೆಣ್ಣು, ಎರಡು ಗಂಡು), ಚಾಂದ್‍ಬೀ ಮೂರನೇ ಮಗುವಾಗಿ ಆ ಕುಟುಂಬದಲ್ಲಿ ಜನಿಸುತ್ತಾರೆ.

ಇದು ಸುಮಾರು ಎಪ್ಪತ್ತು ವರ್ಷಗಳ ಹಿಂದಿನ ಒಂದು ಸಂದರ್ಬ. ಹೈದರಾಬಾದ ಕರ್ನಾಟಕದ ಹಲವು ಪ್ರದೇಶಗಳನ್ನು ನಿಜಾಮರು ಆಳುತ್ತಿದ್ದ ಕಾಲ. ನಿಜಾಮ ಸಂಸ್ಥಾನದ ಪರವಾಗಿ ‘ರಜಾಕರ’ರು ಈ ಭಾಗಗಳಿಂದ ತೆರಿಗೆಯನ್ನು ಸಂಗ್ರಹಿಸುತ್ತಿದ್ದರು. ಆಗಿನ ರಜಾಕರರ ತೆರಿಗೆ ಸಂಗ್ರಹಣಾ ಪದ್ಧತಿ ಸರಿ ಇಲ್ಲದ ಕಾರಣ ಹಲವು ಜನ ಸಮೂದಾಯ ಇದರ ವಿರುದ್ಧ ದನಿ ಎತ್ತುತ್ತಾರೆ, ತೆರಿಗೆ ನೀಡುವುದನ್ನು ನಿರಾಕರಿಸುತ್ತಾರೆ. ವಿರೂಪಾಕ್ಷ ಗೌಡರು ಅದರ ಮುಂದಾಳತ್ವ ವಹಿಸುತ್ತಾರೆ. ಆಗ ರಜಾಕರರು ಈ ಗುಂಪಿನ ಮೇಲೆ ದಾಳಿ ಮಾಡುತ್ತಾನೆ. ದಾಳಿ ತೀರ್ವತೆಗೆ ಹೋಗಿ ಇಬ್ಬರ ನಡುವೆ ದೊಡ್ಡ ಹೋರಾಟವಾಗುತ್ತದೆ. ಈ ಸಂದರ್ಭದಲ್ಲಿ ರಜಾಕರರು ಅತ್ಯಂತ ಕ್ರೂರವಾಗಿ ನಡೆದುಕೊಳ್ಳುತ್ತಾರೆ. ಕೊಲೆ-ಸುಲಿಗೆ- ಅತ್ಯಾಚಾರಗಳು ನಡೆಯುತ್ತವೆ. ಈ ದಂಗೆಯಲ್ಲಿ ಪಾಲ್ಗೊಂಡಿದ್ದಾರೆ ಎಂಬ ಸಂಶಯದಲ್ಲಿ ಚಾಂದ್‍ಬೀಯ ತಂದೆಯನ್ನೂ ಕೂಡ ಕಡಿದುಹಾಕಲಾಗುತ್ತದೆ. ಈ ಘಟನೆ ನಡೆದಾಗ ಚಾಂದ್‍ಬೀಗೆ ಆರು ವರ್ಷ. ಈ ಘಟನೆಯನ್ನು ನೋಡಿ ತಾಯಿಗೆ ಹೃದಯಾಘಾತವಾಗುತ್ತದೆ, ಖಾಯಿಲೆಗೆ ಬೀಳುತ್ತಾರೆ ಮತ್ತು ಕೊನೆಗೆ ಸಾವಿಗೆ ಶರಣಾಗುತ್ತಾರೆ. ಮಕ್ಕಳೆಲ್ಲರೂ ತಂದೆ ತಾಯಿಯನ್ನ ಕಳೆದುಕೊಂಡು ಅನಾಥರಾಗುತ್ತಾರೆ. ಆದರೆ ಇವರ ಸೋದರ ಮಾವ ಈ ಎಲ್ಲಾ ಮಕ್ಕಳನ್ನು ಕಕ್ಕೇರಾಗೆ ಕರೆದುಕೊಂಡು ಹೋಗಿ ಸಲಹುತ್ತಾರೆ.

ತಾಯಿ ಸಾಯುವಾಗ ಚಾಂದ್‍ಬೀ ಮೂರನೇ ತರಗತಿಯಲ್ಲಿ, ಉರ್ದು ಮಾಧ್ಯಮದಲ್ಲಿ ಓದುತ್ತಿದ್ದರು. ಮನೆಯಲ್ಲಿ ಬಡತನ ಇದ್ದ ಕಾರಣ ಆಕೆಯನ್ನು ಶಾಲೆಯಿಂದ ಬಿಡಿಸಿ ಕೆಲಸಕ್ಕೆ ಕಳುಹಿಸಲಾಗುತ್ತದೆ. ಆದರೆ ಆಕೆ ಅಕ್ಷರಗಳನ್ನು ಓದಲು ಮತ್ತು ತನ್ನ ಹೆಸರನ್ನು ಬರೆಯಲು ಆಗಲೇ ಕಲಿತಿದ್ದಳು. ಶಾಲೆ ಬಿಟ್ಟ ಮೇಲೆ ಬೇರೆಯವರ ಹೊಲದಲ್ಲಿ ದುಡಿಯಲು ಪ್ರಾರಂಭಿಸುತ್ತಾರೆ. ನಂತರ ಅವರ 15ನೇ ವಯಸ್ಸಿನಲ್ಲಿ ಸೋದರ ಮಾವನ ಜೊತೆ ಮದುವೆಯಾಗುತ್ತದೆ. ಚಾಂದ್‍ಬೀಗೆ ನಾಲ್ಕು ಜನ ಮಕ್ಕಳು-ಮೂರು ಹೆಣ್ಣು, ಒಂದು ಗಂಡು. ಗಂಡನ ಮನೆಯಲ್ಲಿ ಸ್ವಲ್ಪ ಹೊಲ ಇದ್ದರೂ, ಸಂಸಾರ ದೊಡ್ಡದಾಗಿದ್ದರಿಂದ ಹೊರಗಡೆ ಕೆಲಸಕ್ಕೆ ಹೋಗುವುದು ಅನಿವಾರ್ಯವಾಗಿತ್ತು. ಹೊಲದಲ್ಲಿ ಸೆದೆ ತೆಗೆಯವುದು, ಶೇಂಗಾ ಬಿಡಿಸುವುದು ಹೀಗೆ ನಿತ್ಯ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಇವರು ಪೌಲಿಗೆ (25 ಪೈಸೆ), ಎಂಟಾಣೆಗೆ ದಿನವಿಡಿ ದುಡಿದವರು, ಅನ್ನ ರೊಟ್ಟಿ ಇಲ್ಲದೆ ಬರಿ ಪುಂಡೆ ಪಲ್ಯೆ ಬೇಯಿಸಿ ಅದಕ್ಕೆ ಉಪ್ಪು ಬೆರೆಸಿ ತಿಂದವರು. ಇವರು ಸಂತೆ ಕಂಡವರಲ್ಲ, ಹೊಲದ ತಪ್ಪಲುಗಳನ್ನೇ ವರ್ಷ’Àುಕಾಲ ಬೇಯಿಸಿ ತಿಂದವರು.

ಕೆಲವು ವರ್ಷಗಳ ನಂತರ ಸರಕಾರ ಕಕ್ಕೆರಾದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಪ್ರಾರಂಭಿಸುತ್ತದೆ. ಚಾಂದ್‍ಬೀಯ ಗಂಡ ಕಟ್ಟಡ ಕಾಮಗಾರಿಯಲ್ಲಿ ನಿμÉ್ಠಯಿಂದ ದುಡಿತಾರೆ. ಮೂರನೇ ತರಗತಿಯವರೆಗೆ ಓದಿದ ಕಾರಣ ಚಾಂದ್‍ಬೀಗೆ ಅದೇ ದವಾಖಾನೆಯಲ್ಲಿ ‘ದಾಯಿ’ಯ ಕೆಲಸ ಸಿಗುತ್ತದೆ. ಒಂದು ಬಾಣಂತನಕ್ಕೆ (ಡೆಲಿವರಿ) ಎರಡು ರೂಪಾಯಿಯಂತೆ ಅವರ ಗೌರವ ಧನವನ್ನ ನಿಗದಿ ಮಾಡಲಾಗುತ್ತದೆ. ದಾಯಿ ಕೆಲಸ ಅಷ್ಟು ಸುಲಭವಾಗಿರಲಿಲ್ಲ, ಸುತ್ತಮುತ್ತಲೆಲ್ಲೂ ಆರೋಗ್ಯ ಕೇಂದ್ರವಿರದ ಕಾರಣ ಚಾಂದ್‍ಬೀ ಸುತ್ತಮುತ್ತಲಿನ ಹಳ್ಳಿಗಳಿಗೆ ನೆಡದೇ ಹೋಗಬೇಕಾಗಿತ್ತು. ಆಗ ದೂರವನ್ನ ಹರದಾರಿ ಮೂಲಕ ಅಳತೆ ಮಾಡುತಿದ್ದರು. ಏಳು, ಹತ್ತು ಹರದಾರಿ ನೆದುಕೊಂಡು ಹೋಗಿ ಬಾಣಂತನ ಮಾಡಿ ಬರಬೇಕಾಗಿತ್ತು. ಮುಸ್ಲಿಂ ಹೆಣ್ಣು ಮಕ್ಕಳು ಮನೆಯಿಂದ ಹೊರಗೆ ಹೋಗಲು ನಿರ್ಬಂಧವಿದ್ದ ಆ ಸಂದರ್ಬದಲ್ಲಿಯೂ ಕೂಡ ದೂರ ದೂರದ ಹಳ್ಳಿಗಳಿಗೆ ಹೋಗಿ ಸೇವೆ ಮಾಡಿ ಬರುತ್ತಿದ್ದರು. ಧರ್ಮ, ಜಾತಿ ಯಾವುದನ್ನೂ ಲೆಕ್ಕಿಸದೆ ಕುರುಬರ ಮನೆಯಲ್ಲೂ, ದೊರೆಗಳ ಮನೆಯಲ್ಲೂ, ಬ್ರಾಹ್ಮಣರ ಮನೆಯಲ್ಲೂ ಅಷ್ಟು ಪ್ರೀತಿಯಿಂದ ಸೇವೆ ಮಾಡಿದ್ದಾರೆ. ದವಾಖಾನೆಯಲ್ಲಿ ವೈದ್ಯರಾದವರು ದಾಯಿಗಿಂತ ತುಂಬಾ ಚಿಕ್ಕವರು. ದಾಯಿ ಅವರನ್ನು ‘ಯಪ್ಪಾ ಬಾ, ಹೋಗು’ ಎಂದು ಏಕವಚನದಿಂದ ಮಾತನಾಡಿಸುತ್ತಿದ್ದರು. ಇದನ್ನು ಗಮನಿಸಿದ ಗಂಡ ಒಮ್ಮೆ ಚಾಂದ್‍ಬೀಯನ್ನು ಗದರಿಸುತ್ತಾರೆ, ‘ವೈದ್ಯರು ವಿದ್ಯಾವಂತರು, ಬಹಳ ಓದಿದವರು, ಅವರನ್ನು ಏಕವಚನದಲ್ಲಿ ಕರೆಯಬಾರದು, ಇನ್ನು ಮೇಲೆ ನೀನು ಅವರನ್ನು ‘ಸರ್’ ಎಂದು ಕರೆಯಬೇಕು’ ಎನ್ನುತ್ತಾರೆ. ಚಾಂದ್‍ಬೀಗೆ ಅದು ಇಷ್ಟವಾಗೊದಿಲ್ಲ. ಅವರು ಗಂಡನಿಗೆ “ವೃತ್ತಿಗೆ ಗೌರವಕೊಡಬೇಕು, ಪ್ರೀತಿಗೆ-ಸಂಬಂಧಕ್ಕೆ ಬೆಲೆ ಕೊಡಬೇಕು, ವೈದ್ಯರು ನನ್ನ ಮಗನ ಸಮಾನ, ನಾನು ಅವರನ್ನ ಸರ್ ಎಂದು ಕರೆಯೋದಿಲ್ಲ” ಎಂದು ನೇರವಾಗಿ ಹೇಳಿದ್ದರು.

ಸುಮಾರು ನಲವತ್ತು ವರ್ಷ ದಾಯಿಯಾಗಿ ಕೆಲಸಮಾಡಿದ ಚಾಂದ್‍ಬೀಗೆ ಇಲ್ಲಿಯವರೆಗೆ ಎμಂಂಔ ಬಾಣಂತನ ಮಾಡಿದ್ದೀರಿ ಎಂದು ಕೇಳಿದರೆ ‘ನನ್ನ ತಲೆಯಲ್ಲಿರುವ ಕೂದಲಿನಷ್ಟು’ ಎಂದು ಹೇಳಿ ನUುÀ ತ್ತಾರೆ. ಇವರು ಮಾಡಿದ ಎಲ್ಲಾ ಬಾಣಂತನ ಸಪಲs ವಾಗಿದೆ. ವಯಸ್ಸಾಗಿ PೈÉ ನqುÀ ಗೋದ್ರಿಂದ ದಾಯಿ ಕೆಲಸವನ್ನ ಬಿಟ್ಟು ಈಗ ಬಹಳ ವರ್ಷ ಆಯ್ತು. ಈಗಲೂ ದೂರದೂರದಿಂದ ದಾಯಿಯನ್ನ ನೋಡೋದಿಕ್ಕೆ ಜನ ಬರ್ತಾರೆ, ಅವರನ್ನ ಗೌರವದಿಂದ ನೋಡ್ತಾರೆ, ಸತ್ಕರಿಸುತ್ತಾರೆ. ಮನೆಗೆ ಕರೆದುಕೊಂಡು ಹೋಗಿ ಆರೈಕೆ ಮಾಡಿ ಕಳಿಸುತ್ತಾರೆ. ಹಳ್ಳಿ ಹಳ್ಳಿ ಸುತ್ತಿ ಜೀವನ ನಡೆಸಿದ ಚಾಂದ್‍ಬೀ ಈಗ ಯಾದಗಿರಿ ಪಟ್ಟಣದಲ್ಲಿ ತನ್ನ ಮಗನ ಜೊತೆಯಲ್ಲಿದ್ದಾರೆ. ಆದರೆ ಅವರಿಗೆ ಹಳ್ಳಿಯ ಬದುಕೇ ±ಇಚಿಂμಂಔ ಎಂಬ ಭಾವನೆ ಇದೆ. ಹಳ್ಳಿಯಲ್ಲಿ ತುಂಬು ಪ್ರೀತಿ ಇದೆ, ಊಟ ಮಾಡದಿದ್ದರೂ ನನ್ನ ಹಳ್ಳಿಯ ಜನರನ್ನ ನೋಡಿ ನನಗೆ ಹೊಟ್ಟೆ ತುಂಬುತ್ತದೆ, ಅಲ್ಲಿ ಪ್ರೇಮ ಕಾಣ್ತದೆ ಎನ್ನುತ್ತಾರೆ.

ಈ ವಯಸ್ಸಿನಲ್ಲಿಯೂ ತನ್ನ ಕೈಲಾದ ಕೆಲಸವನ್ನ ಮಾಡ್ತಿದಾರೆ. ಹಂಡೆಯಲಿ ನೀರು ಕಾಯಿಸುವುದು, ತೆವಳುತ್ತಾ ಅಂಗಳದ ಕಸ ತೆಗೆಯುವುದು, ದವಸ ಧಾನ್ಯ ಚೊಕ್ಕ ಮಾಡುವುದು ಹೀಗೆ ಮುಂಜಾನೆ ಐದು ಗಂಟೆಗೆ ಎದ್ದು ತನ್ನ ಕೆಲಸ ಪ್ರಾರಂಭಿಸುತ್ತಾರೆ. ಅವರಿಗೆ ಜನರೊಡನೆ ಮಾತನಾಡುವುದು ಬಹಳ ಇಷ್ಟ. ಮನೆ ಮನೆಗೆ ಹೋಗಿ ತರಕಾರಿ ಮಾರುವವರು, ಹಾಲು-ಮೊಸರು ಮಾರುವ ಗೌಳಿಗರು ಹೀಗೆ ಮನೆ ಬಾಗಿಲಿಗೆ ಬಂದ ಎಲ್ಲರನ್ನೂ ಮಾತನಾಡಿಸಿ, ಕೊನೆ ಪಕ್ಷ ಒಂದು ಲೋಟ ನೀರನ್ನಾದರೂ ನೀಡಿ ಕಳುಹಿಸುತ್ತಾರೆ. ‘ಕಡ್ಡಿ ಗುಡ್ಡವಾಗಿ ಬೆಳೆಯಬೇಕು’ ಇದು ಅವರು ಎಲ್ಲಾ ಮಕ್ಕಳಿಗೂ ಹೇಳುವ ಮಾತು. ಹುಟ್ಟುವಾಗ ಎಲ್ಲರೂ ಚಿಕ್ಕವರು, ಬಡವರು ಅಥವಾ ತಿಳಿವಳಿಕೆ ಇಲ್ಲದವರು ಆದರೆ ಬೆಳೆದು ಅವರು ಆಲದ ಮರವಾಗಬೇಕು, ಹತ್ತಾರು ಜನಕ್ಕೆ ಆಸರೆಯಾಗಬೇಕು ಎಂಬುದು ಅವರ ನಿಲುವು. ಅದಕ್ಕಾಗಿ ಶಿಕ್ಷಣ ಬಹಳ ಮುಖ್ಯ, ಎಲ್ಲರಿಗೂ ಶಿಕ್ಷಣ ಸಿಗಬೇಕು ಎನ್ನುತ್ತಾರೆ. ತನ್ನ ಎಲ್ಲಾ ಮಕ್ಕಳಿಗೆ ಓದಿಸಲು ಆಗದಿದ್ದರೂ ಒಬ್ಬ ಮಗನನ್ನು ಸರಿಯಾಗಿ ಶಾಲೆಗೆ ಕಳುಹಿಸಿದ್ದಾರೆ, ಈಗ ಆವರು ಸರಕಾರಿ ನೌಕರಿಯಲ್ಲಿದ್ದಾರೆ. ದಾದಿಯದು ನೇರ ನುಡಿಯ ಸ್ವಭಾವ, ಇದ್ದದ್ದನ್ನ ಇದ್ದ ಹಾಗೆ ನೇರವಾಗಿ ಹೇಳುವುದು ಅವರ ಪದ್ದತಿ. ಜೊತೆಗೆ ಹಳ್ಳಿ ಹಳ್ಳಿ ಸುತ್ತಿ, ಜನರನ್ನ ನೋಡಿ ಮೌಲ್ಯಗಳನ್ನ ಸಂಪಾದಿಸಿದ್ದಾರೆ. ಈಗ ಅವರು ಊರಿನ ಹಿರಿಯರು, ಜನ ಯಾವುದೇ ಚಿಕ್ಕ ಪುಟ್ಟ ನ್ಯಾಯ ತೀರ್ಮಾನ, ತಂಟೆ ತಕರಾರುಗಳಿದ್ದರೂ ದಾದಿಯನ್ನು ಕೇಳಿ ಅವರ ತೀರ್ಮಾನದಂತೆ ನಡೆದುಕೊಳ್ಳುತ್ತಾರೆ. ದಾದಿ ಎಲ್ಲರಿಗೂ ಅಚ್ಚು ಮೆಚ್ಚು, ಅವರು ಬೆಳೆಸಿದ ಆಲದ ಮರದ ಕೆಳಗೆ ಕೂಡಿ ಬಾಳುವ ಕುಟುಂಬ ನಮ್ಮದು ಎಂದು ಗೌರವದಿಂದ ಜನ ಮಾತನಾಡುತ್ತಾರೆ.

(ನನ್ನ ಪಕ್ಕದ ಮನೆಯ, ಪ್ರೀತಿಯ ಚಾಂದ್‍ಬೀ ದಾದಿಯೊಂದಿಗಿನ ಚಿಕ್ಕ ಸಂದರ್ಶನದ ಸಾರಾಂಶ ರೂಪ ಈ ಲೇಖನ)

ಏನು, ನೀನು ಇನ್ನೂ ಮಗುವೆ?


ನಾನು ಶಿವರಾಮ ಕಾರಂತರು ಬರೆದ “ಶಿಕ್ಷಣ-ಮಕ್ಕಳ ಉತ್ಪಾದಕ ಶಕ್ತಿ” ಎಂಬ ಲೇಖನವನ್ನ ಓದುತ್ತಿದ್ದೆ. ಮಕ್ಕಳಲ್ಲಿ ಸಹಜವಾಗಿಯೇ ಇರುವ ಸೃಜನಾತ್ಮಕತೆಯ ಕುರಿತು ಈ ಲೇಖನದಲ್ಲಿ ಕಾರಂತರು ಪ್ರಸ್ತಾಪಿಸುತ್ತಾರೆ. ಈ ಲೇಖನದ ಹಿನ್ನೆಲೆಯಲ್ಲಿ ನನ್ನ ಅನುಭವಕ್ಕೆ ಸಿಲುಕಿದ ಒಂದು zಂಇμಂ್ಟಂತವನ್ನು ನಿಮ್ಮ ಮುಂದಿಡುತ್ತೇನೆ. ಈ ಲೇಖನಕ್ಕೆ ನೀಡಿದ ತಲೆಬರಹವನ್ನು ಸ್ವಲ್ಪ ಗಮನಿಸಿ, ‘ಏನು, ನೀನು ಇನ್ನೂ ಮಗುವೇ?’ ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ಇರುವ ಎಲ್ಲರ ಮನೆಯಲ್ಲೂ ಕೇಳಿ ಬರುವ ಒಂದು ಸಹಜವಾದ ಪ್ರಶ್ನೆ. ಈ ಒಂದು ಪ್ರಶ್ನೆಯೇ ಮಗುವನ್ನು ಮಗುವಾಗಿರಲು ಬಿಡದೆ, ಅದರ ಸಹಜ ಸೃಜನಶೀಲತೆಯನ್ನು ಮುರುಟಿ ಹಾಕಲು ಸಾಕು.

ವಿಶೇಷವೆಂದರೆ ಮಗು ಶಾಲೆಯ ಮೆಟ್ಟಿಲನ್ನು ಹತ್ತುವುದಕ್ಕೂ ಮುನ್ನ ಅದು ಏನೇ ಮಾಡಿದರು ಅದು ನಮಗೆ ಆಪ್ಯ, ನಾವು ಅದರ ಎಲ್ಲಾ ಚಟುವಟಿಕೆಯನ್ನ, ತುಂಟಾಟವನ್ನು ಆನಂದಿಸುತ್ತೇವೆ. ಆದರೆ ಒಮ್ಮೆ ಶಾಲೆಯ ನಾಲ್ಕು ಗೋಡೆಯ ಮದ್ಯೆs ಸೇರಿಬಿಟ್ಟರೆ, ಆ ಮಗುವಿನ ಜೀವನ ಪೂರ್ತಿ ಆ ನಾಲ್ಕು ಗೋಡೆಯ ನqುÀ ವೆ ನqಂÉ iÀುುವ PೃÀ ತಕ ಉತ್ಪಾದಕತೆಗೆ ಕೇಂದ್ರೀಕೃತವಾಗಿ ಬಿಡುತ್ತದೆ. ಮಗು ಶಾಲೆಯ ಅಭ್ಯಾಸವನ್ನು ಬಿಟ್ಟು ಬೇರೆ ಏನೇ ಮಾಡಿದರೂ ಈ ಮೇಲಿನ ಪ್ರಶ್ನೆ ಮಗುವಿಗೆ ನೇರವಾಗಿ ತಲುಪುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ತಿಳಿದಿರುವ ನಮ್ಮಂತವರ ಮನೆಯಲ್ಲಿಯೇ ಈ ಸನ್ನಿವೇಶ ಎದುರಾದಾಗ ಮನಸ್ಸಿಗೆ ಬಹಳ ಖೇದ ಎನಿಸುತ್ತದೆ.

ಭೂಮಿಕಾ ನಾಲ್ಕು ವರ್ಷzಂ ತುಂಟ ಹುಡುಗಿ. ಆಕೆಯನ್ನ ನಿಯಂತ್ರಿಸುವುದು ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ Pಂμಂಔಸಾಧ್ಯ. ಅವಳ ಚಟುವಟಿಕೆಗಳು ಮತ್ತು ಕಲ್ಪನೆ ಅμಂಂಔ ತೀಕ್ಷ್ಣ ಮತ್ತು ವಿಶಾಲವಾದದ್ದು. ಬಹುಶಹ ಇದೇ ಕಾರಣದಿಂದ ಆಕೆಗೆ ಮೂರು ವರ್ಷ ತುಂಬಿದ ಮೇಲೆ ಅಂಗನವಾಡಿ ಕೇಂದ್ರಕ್ಕೆ ಬಿಡಲು ಪ್ರಾರಂಭಿಸಿದ್ದರು. ನಾನು ಊರಿಗೆ ಹೋದಾಗಲೆಲ್ಲ ಆಕೆಯನ್ನು ಅಂಗನವಾಡಿಗೆ ಬಿಡುವ ಮತ್ತು ಕರೆತರುವ ಕೆಲಸ ಮಾಡುತ್ತಿದ್ದೆ. ಈ ಪ್ರಕ್ರಿಯೆಯಲ್ಲಿ ನಾನು ಗಮನಿಸಿದ ಅಂಶ, ಆವಳು ಮನೆಯಲ್ಲಿ ಇರುವಾಗ ಮತ್ತು ಅಂಗನವಾಡಿಯಲ್ಲಿ ಇರುವಾಗಿನ ವೈರುದ್ಯ ವ್ಯತ್ಯಾಸ. ಮನೆಯಲ್ಲಿ ಹೆಚ್ಚು ಕ್ರಿಯಾಶಿಲವಾಗಿರುತ್ತಿದ್ದ ಆಕೆ, ಅಂಗನವಾಡಿಯಲ್ಲಿ ಮಂಕಾಗಿ ಕೂರುತ್ತಿದ್ದಳು. ಮನೆಯಲ್ಲಿಯೂ ಕೂಡ ಈ ಹಿಂದೆ ಇದ್ದ ಉತ್ಸಾಹ, ಸೃಜನಾತ್ಮಕತೆ ಕಡಿಮೆಯಾಗಿತ್ತು. ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ ಆಕೆಯನ್ನು ನಿಯಂತ್ರಿಸುವುದು ಕಷ್ಟವಾಗಿ ಈ ಮೇಲಿನ ಪ್ರಶ್ನೆಯನ್ನು ಕೇಳಿಕೇಳಿ ಅಂಗನವಾಡಿಗೆ ದಬ್ಬಿದ್ದರೆ ಅಂಗನವಾಡಿಯಲ್ಲಿ ಇದಕ್ಕೆ ಭಿನ್ನವಾದ ಹಿಂಸೆ ಇತ್ತು.

ಶಿಕ್ಷಣ ಮಕ್ಕಳ ಉತ್ಪಾದಕ ಶಕ್ತಿಗೆ ಪ್ರೇರಣೆ ನೀಡಬೇಕು, ಅಂಗನವಾಡಿ ಅಥವಾ ಶಾಲೆಗಳಲ್ಲಿ ಇದಕ್ಕೆ ಪೂರಕವಾದ ವಾತಾವರಣವಿರಬೇಕು. ಆದರೆ ಆ ಅಂಗನವಾಡಿಯಲ್ಲಿ ವಿಶಾಲವಾದ ಜಾಗವನ್ನು ಹೊರತುಪಡಿಸಿದರೆ ಮಕ್ಕಳ ಆಟಕ್ಕೆ ಯೋಗ್ಯವಾದ ಯಾವುದೇ ವಸ್ತುಗಳು ಇರಲಿಲ್ಲ. ಆ ಅಂಗನವಾಡಿಯಲ್ಲಿ ನಾನು ವಿ±ಇಂμಂವಾಗಿ ಗಮನಿಸಿದ್ದು ಅಲ್ಲಲ್ಲಿ ಬಿದ್ದಿರುವ ಒಂದರಿಂದ ಎರಡು ಅಡಿ ಉದ್ದದ ಹಲವಾರು ಬಟ್ಟೆ ತುಂಡುಗಳು. ಒಮ್ಮೆ ಭೂಮಿಕಾಳನ್ನು ಕೇಳಿದೆ. ಅವಳು ಹೇಳಿದ್ದು “ತುಂಟಾಟ ಮಾಡುವ ಮಕ್ಕಳ ಕೈಯನ್ನು ಆ ಬಟ್ಟೆ ತುಂಡುಗಳಿಂದ ಕಟ್ಟಿ ಒಂದು ಮೂಲೆಯಲ್ಲಿ ಕೂರಿಸುತ್ತಾರೆ”. ಆ ದಿನ ನಾನು ಆಕೆಯನ್ನು ತಬ್ಬಿ ಹಿಡಿದು ಅತ್ತಿದ್ದೆ. ಸಹಜವಾಗಿ, ತಮಾμÉಗೆಂದು ಯಾರಾದರೂ ನಿಮ್ಮ ಎರಡೂ ಕೈಗಳನ್ನು ಕಟ್ಟಿ ಹಾಕಿದರೆ, ನಿಮ್ಮ ಮನಸ್ಸಿನ ಒಳಗೆ ಆಗುವ ಬದಲಾವಣೆಯನ್ನು ಸ್ವಲ್ಪ ಗಮನಿಸಿ. ಹಾಗಿರುವಾಗ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಇದು ಇನ್ಯಾವ ರೀತಿಯ ಪರಿಣಾಮ ಬೀರಬಲ್ಲದು?

ನಾವು ಶಿಕ್ಷಕರಲ್ಲಿ ಶಿಕ್ಷಣದ ದೃಷ್ಟಿಕೋನವನ್ನು ಬದಲಾಯಿಸುವ ಪ್ರಯತ್ನದಲ್ಲಿದ್ದೇವೆ. ಆದರೆ ನಮ್ಮ ಮನೆಗಳಲ್ಲಿ, ಸಂಬಂಧಿಸಿದ ವ್ಯಕ್ತಿಗಳಲ್ಲಿ ಈ ಬದಲಾವಣೆಯನ್ನು ತರಲು ಸೋಲುತ್ತಿದ್ದೇವೆ. ಅದು ಅμಂಂಔ ಸುಲಭವೂ ಅಲ್ಲ. ಮಕ್ಕಳಲ್ಲಿ ಸಹಜವಾಗಿ ಒಂದು ಉತ್ಪಾದಕ ಶಕ್ತಿ ಇದೆ. ಅವರು ಮಾಡುವ ಪ್ರತಿಯೊಂದು ಚಟುವಟಿಕೆಯೂ ಹೊಸದು, ಅದು ಅನುಕರಣೆ ಅಲ್ಲ. ಮನೆಯಲ್ಲೂ ಮತ್ತು ಶಾಲೆಗಳಲ್ಲೂ ಅದನ್ನು ಪ್ರೇರೇಪಿಸುವ ವಾತಾವರಣ ಸೃಷ್ಟಿಯಾಗಬೇಕು.

ಭೂಮಿಕಾಳ ಕಲ್ಪನೆಯ ಅಂಗಡಿಯಲ್ಲಿ ಎಲ್ಲವೂ ಇದೆ, ಅಲ್ಲಿ ಅವಳಿಗೆ ಮಾತ್ರ ನಮಗೆ ಬೇಕಾದ್ದನ್ನು ಮಾರಲು ಸಾದ್ಯ, ಚಾಕೋಲೆಟ್, ಬಟ್ಟೆ, ಮೀನು, ಚಪ್ಪಲ್....ಮನಶ್ಯಾಂತಿ ಎಲ್ಲವೂ ಇದೆ....ಇವೆಲ್ಲವನ್ನೂ ಕೇವಲ ಮೂರು ರೂಪಾಯಿಗೆ ಕೊಡಲು ಅವಳಿಗೆ ಮಾತ್ರ ಸಾಧ್ಯ. ನಮಗೆ ಮಾಡಲು ಸಾಧ್ಯವಾಗದ್ದೆಲ್ಲಾ ಮಕ್ಕಳಿಗೆ ಮಾಡಲು ಸಾದ್ಯ. ಈಗ ಹೇಳಿ ‘ಏನು, ನೀನು ಇನ್ನೂ ಮಗುವೆ?’ ಎಂದು ಕೇಳುವುದು ಎಷ್ಟು ಸೂಕ್ತ.