ನಾನು ಶಿವರಾಮ ಕಾರಂತರು ಬರೆದ “ಶಿಕ್ಷಣ-ಮಕ್ಕಳ ಉತ್ಪಾದಕ ಶಕ್ತಿ” ಎಂಬ ಲೇಖನವನ್ನ ಓದುತ್ತಿದ್ದೆ. ಮಕ್ಕಳಲ್ಲಿ ಸಹಜವಾಗಿಯೇ ಇರುವ ಸೃಜನಾತ್ಮಕತೆಯ ಕುರಿತು ಈ ಲೇಖನದಲ್ಲಿ ಕಾರಂತರು ಪ್ರಸ್ತಾಪಿಸುತ್ತಾರೆ. ಈ ಲೇಖನದ ಹಿನ್ನೆಲೆಯಲ್ಲಿ ನನ್ನ ಅನುಭವಕ್ಕೆ ಸಿಲುಕಿದ ಒಂದು zಂಇμಂ್ಟಂತವನ್ನು ನಿಮ್ಮ ಮುಂದಿಡುತ್ತೇನೆ. ಈ ಲೇಖನಕ್ಕೆ ನೀಡಿದ ತಲೆಬರಹವನ್ನು ಸ್ವಲ್ಪ ಗಮನಿಸಿ, ‘ಏನು, ನೀನು ಇನ್ನೂ ಮಗುವೇ?’ ಸಾಮಾನ್ಯವಾಗಿ ಶಾಲೆಗೆ ಹೋಗುವ ಮಕ್ಕಳು ಇರುವ ಎಲ್ಲರ ಮನೆಯಲ್ಲೂ ಕೇಳಿ ಬರುವ ಒಂದು ಸಹಜವಾದ ಪ್ರಶ್ನೆ. ಈ ಒಂದು ಪ್ರಶ್ನೆಯೇ ಮಗುವನ್ನು ಮಗುವಾಗಿರಲು ಬಿಡದೆ, ಅದರ ಸಹಜ ಸೃಜನಶೀಲತೆಯನ್ನು ಮುರುಟಿ ಹಾಕಲು ಸಾಕು.
ವಿಶೇಷವೆಂದರೆ ಮಗು ಶಾಲೆಯ ಮೆಟ್ಟಿಲನ್ನು ಹತ್ತುವುದಕ್ಕೂ ಮುನ್ನ ಅದು ಏನೇ ಮಾಡಿದರು ಅದು ನಮಗೆ ಆಪ್ಯ, ನಾವು ಅದರ ಎಲ್ಲಾ ಚಟುವಟಿಕೆಯನ್ನ, ತುಂಟಾಟವನ್ನು ಆನಂದಿಸುತ್ತೇವೆ. ಆದರೆ ಒಮ್ಮೆ ಶಾಲೆಯ ನಾಲ್ಕು ಗೋಡೆಯ ಮದ್ಯೆs ಸೇರಿಬಿಟ್ಟರೆ, ಆ ಮಗುವಿನ ಜೀವನ ಪೂರ್ತಿ ಆ ನಾಲ್ಕು ಗೋಡೆಯ ನqುÀ ವೆ ನqಂÉ iÀುುವ PೃÀ ತಕ ಉತ್ಪಾದಕತೆಗೆ ಕೇಂದ್ರೀಕೃತವಾಗಿ ಬಿಡುತ್ತದೆ. ಮಗು ಶಾಲೆಯ ಅಭ್ಯಾಸವನ್ನು ಬಿಟ್ಟು ಬೇರೆ ಏನೇ ಮಾಡಿದರೂ ಈ ಮೇಲಿನ ಪ್ರಶ್ನೆ ಮಗುವಿಗೆ ನೇರವಾಗಿ ತಲುಪುತ್ತದೆ. ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳು ತಿಳಿದಿರುವ ನಮ್ಮಂತವರ ಮನೆಯಲ್ಲಿಯೇ ಈ ಸನ್ನಿವೇಶ ಎದುರಾದಾಗ ಮನಸ್ಸಿಗೆ ಬಹಳ ಖೇದ ಎನಿಸುತ್ತದೆ.
ಭೂಮಿಕಾ ನಾಲ್ಕು ವರ್ಷzಂ ತುಂಟ ಹುಡುಗಿ. ಆಕೆಯನ್ನ ನಿಯಂತ್ರಿಸುವುದು ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ Pಂμಂಔಸಾಧ್ಯ. ಅವಳ ಚಟುವಟಿಕೆಗಳು ಮತ್ತು ಕಲ್ಪನೆ ಅμಂಂಔ ತೀಕ್ಷ್ಣ ಮತ್ತು ವಿಶಾಲವಾದದ್ದು. ಬಹುಶಹ ಇದೇ ಕಾರಣದಿಂದ ಆಕೆಗೆ ಮೂರು ವರ್ಷ ತುಂಬಿದ ಮೇಲೆ ಅಂಗನವಾಡಿ ಕೇಂದ್ರಕ್ಕೆ ಬಿಡಲು ಪ್ರಾರಂಭಿಸಿದ್ದರು. ನಾನು ಊರಿಗೆ ಹೋದಾಗಲೆಲ್ಲ ಆಕೆಯನ್ನು ಅಂಗನವಾಡಿಗೆ ಬಿಡುವ ಮತ್ತು ಕರೆತರುವ ಕೆಲಸ ಮಾಡುತ್ತಿದ್ದೆ. ಈ ಪ್ರಕ್ರಿಯೆಯಲ್ಲಿ ನಾನು ಗಮನಿಸಿದ ಅಂಶ, ಆವಳು ಮನೆಯಲ್ಲಿ ಇರುವಾಗ ಮತ್ತು ಅಂಗನವಾಡಿಯಲ್ಲಿ ಇರುವಾಗಿನ ವೈರುದ್ಯ ವ್ಯತ್ಯಾಸ. ಮನೆಯಲ್ಲಿ ಹೆಚ್ಚು ಕ್ರಿಯಾಶಿಲವಾಗಿರುತ್ತಿದ್ದ ಆಕೆ, ಅಂಗನವಾಡಿಯಲ್ಲಿ ಮಂಕಾಗಿ ಕೂರುತ್ತಿದ್ದಳು. ಮನೆಯಲ್ಲಿಯೂ ಕೂಡ ಈ ಹಿಂದೆ ಇದ್ದ ಉತ್ಸಾಹ, ಸೃಜನಾತ್ಮಕತೆ ಕಡಿಮೆಯಾಗಿತ್ತು. ತಂದೆ, ತಾಯಿ, ಅಜ್ಜಿ, ಮಾವ ಎಲ್ಲರಿಗೂ ಆಕೆಯನ್ನು ನಿಯಂತ್ರಿಸುವುದು ಕಷ್ಟವಾಗಿ ಈ ಮೇಲಿನ ಪ್ರಶ್ನೆಯನ್ನು ಕೇಳಿಕೇಳಿ ಅಂಗನವಾಡಿಗೆ ದಬ್ಬಿದ್ದರೆ ಅಂಗನವಾಡಿಯಲ್ಲಿ ಇದಕ್ಕೆ ಭಿನ್ನವಾದ ಹಿಂಸೆ ಇತ್ತು.
ಶಿಕ್ಷಣ ಮಕ್ಕಳ ಉತ್ಪಾದಕ ಶಕ್ತಿಗೆ ಪ್ರೇರಣೆ ನೀಡಬೇಕು, ಅಂಗನವಾಡಿ ಅಥವಾ ಶಾಲೆಗಳಲ್ಲಿ ಇದಕ್ಕೆ ಪೂರಕವಾದ ವಾತಾವರಣವಿರಬೇಕು. ಆದರೆ ಆ ಅಂಗನವಾಡಿಯಲ್ಲಿ ವಿಶಾಲವಾದ ಜಾಗವನ್ನು ಹೊರತುಪಡಿಸಿದರೆ ಮಕ್ಕಳ ಆಟಕ್ಕೆ ಯೋಗ್ಯವಾದ ಯಾವುದೇ ವಸ್ತುಗಳು ಇರಲಿಲ್ಲ. ಆ ಅಂಗನವಾಡಿಯಲ್ಲಿ ನಾನು ವಿ±ಇಂμಂವಾಗಿ ಗಮನಿಸಿದ್ದು ಅಲ್ಲಲ್ಲಿ ಬಿದ್ದಿರುವ ಒಂದರಿಂದ ಎರಡು ಅಡಿ ಉದ್ದದ ಹಲವಾರು ಬಟ್ಟೆ ತುಂಡುಗಳು. ಒಮ್ಮೆ ಭೂಮಿಕಾಳನ್ನು ಕೇಳಿದೆ. ಅವಳು ಹೇಳಿದ್ದು “ತುಂಟಾಟ ಮಾಡುವ ಮಕ್ಕಳ ಕೈಯನ್ನು ಆ ಬಟ್ಟೆ ತುಂಡುಗಳಿಂದ ಕಟ್ಟಿ ಒಂದು ಮೂಲೆಯಲ್ಲಿ ಕೂರಿಸುತ್ತಾರೆ”. ಆ ದಿನ ನಾನು ಆಕೆಯನ್ನು ತಬ್ಬಿ ಹಿಡಿದು ಅತ್ತಿದ್ದೆ. ಸಹಜವಾಗಿ, ತಮಾμÉಗೆಂದು ಯಾರಾದರೂ ನಿಮ್ಮ ಎರಡೂ ಕೈಗಳನ್ನು ಕಟ್ಟಿ ಹಾಕಿದರೆ, ನಿಮ್ಮ ಮನಸ್ಸಿನ ಒಳಗೆ ಆಗುವ ಬದಲಾವಣೆಯನ್ನು ಸ್ವಲ್ಪ ಗಮನಿಸಿ. ಹಾಗಿರುವಾಗ ಚಿಕ್ಕ ಮಕ್ಕಳ ಮನಸ್ಸಿನ ಮೇಲೆ ಇದು ಇನ್ಯಾವ ರೀತಿಯ ಪರಿಣಾಮ ಬೀರಬಲ್ಲದು?
ನಾವು ಶಿಕ್ಷಕರಲ್ಲಿ ಶಿಕ್ಷಣದ ದೃಷ್ಟಿಕೋನವನ್ನು ಬದಲಾಯಿಸುವ ಪ್ರಯತ್ನದಲ್ಲಿದ್ದೇವೆ. ಆದರೆ ನಮ್ಮ ಮನೆಗಳಲ್ಲಿ, ಸಂಬಂಧಿಸಿದ ವ್ಯಕ್ತಿಗಳಲ್ಲಿ ಈ ಬದಲಾವಣೆಯನ್ನು ತರಲು ಸೋಲುತ್ತಿದ್ದೇವೆ. ಅದು ಅμಂಂಔ ಸುಲಭವೂ ಅಲ್ಲ. ಮಕ್ಕಳಲ್ಲಿ ಸಹಜವಾಗಿ ಒಂದು ಉತ್ಪಾದಕ ಶಕ್ತಿ ಇದೆ. ಅವರು ಮಾಡುವ ಪ್ರತಿಯೊಂದು ಚಟುವಟಿಕೆಯೂ ಹೊಸದು, ಅದು ಅನುಕರಣೆ ಅಲ್ಲ. ಮನೆಯಲ್ಲೂ ಮತ್ತು ಶಾಲೆಗಳಲ್ಲೂ ಅದನ್ನು ಪ್ರೇರೇಪಿಸುವ ವಾತಾವರಣ ಸೃಷ್ಟಿಯಾಗಬೇಕು.
ಭೂಮಿಕಾಳ ಕಲ್ಪನೆಯ ಅಂಗಡಿಯಲ್ಲಿ ಎಲ್ಲವೂ ಇದೆ, ಅಲ್ಲಿ ಅವಳಿಗೆ ಮಾತ್ರ ನಮಗೆ ಬೇಕಾದ್ದನ್ನು ಮಾರಲು ಸಾದ್ಯ, ಚಾಕೋಲೆಟ್, ಬಟ್ಟೆ, ಮೀನು, ಚಪ್ಪಲ್....ಮನಶ್ಯಾಂತಿ ಎಲ್ಲವೂ ಇದೆ....ಇವೆಲ್ಲವನ್ನೂ ಕೇವಲ ಮೂರು ರೂಪಾಯಿಗೆ ಕೊಡಲು ಅವಳಿಗೆ ಮಾತ್ರ ಸಾಧ್ಯ. ನಮಗೆ ಮಾಡಲು ಸಾಧ್ಯವಾಗದ್ದೆಲ್ಲಾ ಮಕ್ಕಳಿಗೆ ಮಾಡಲು ಸಾದ್ಯ. ಈಗ ಹೇಳಿ ‘ಏನು, ನೀನು ಇನ್ನೂ ಮಗುವೆ?’ ಎಂದು ಕೇಳುವುದು ಎಷ್ಟು ಸೂಕ್ತ.
No comments:
Post a Comment